Back to Main site

ಸ್ವಾವಲಂಬನೆಗೆ ‘ಸ್ವರಾಜ್ ಉತ್ಸವ’ ಸೆ.13ಕ್ಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಸಂಘ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್‌ನಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳ ಸುಮಾರು 25 ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಲಿವೆ’ ಎಂದರು.

‘ಸ್ವರಾಜ್ ಉತ್ಸವದಲ್ಲಿ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಯುವ ಜನತೆ, ಆರ್ಥಿಕತೆ, ಪ್ರವಾಸೋದ್ಯಮ, ಪರಿಸರ, ವಿಜ್ಞಾನ, ಹವಮಾನ ವೈಪರೀತ್ಯ ಸೇರಿದಂತೆ ಪ್ರಮುಖವಾಗಿ 12 ಅಂಶಗಳನ್ನು ಒಳಗೊಂಡಂತೆ ಚರ್ಚೆ ನಡೆಸಿ ಅರಿವು ಮೂಡಿಸಲಾಗುವುದು. ಉತ್ಸವದಲ್ಲಿ ಭಾಗವಹಿಸುವ ಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಯಾವುದಾರೊಂದು ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಹೇಳಿದರು.

‘ಇದುವರೆಗೂ ಚಳವಳಿ, ಹೋರಾಟ ಮಾಡಿ ರೈತರ ಹಿತಕಾಯುತ್ತಿದ್ದೇವೆ. ಆದರೆ, ಹೋರಾಟದ ಜತೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಸ್ವರಾಜ ಉತ್ಸವ ನಡೆಸಿ ನಮ್ಮ ಹಳ್ಳಿಗಳು ಸ್ವಾವಲಂಬನೆಯಾಗಿ ಬದುಕುವಂತೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಸಂಶೋಧಕಿ ಕವಿತಾ ಕುರಗಂಟಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಎಚ್.ಕೊಪ್ಪಲು ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಪುಟ್ಟಣ್ಣಯ್ಯ ಫೌಂಡೇಷನ್‌ನ ರಣಜಿತ್‌ ಇದ್ದರು.

Share:

More Posts

ನಿರುದ್ಯೋಗ ಸಮಸ್ಯೆಗೇನು ಪರಿಹಾರ? ರೈತನ ಬೆಳೆಗೆ ಬೆಲೆ ಇಲ್ವಾ?: ಶಾಸಕ ಪುಟ್ಟಣ್ಣಯ್ಯಗೆ ವಿದ್ಯಾಥಿಗಳಿಂದ ಪ್ರಶ್ನೆಗಳ ಬಾಣ

ಪಾಂಡವಪುರ, ಸೆಪ್ಟೆಂಬರ್ 12: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೂಕ್ತ ವಿದ್ಯಾ‍ರ್ಹತೆ ಇದ್ದೂ ಕೆಲಸ ಸಿಗುವುದಿಲ್ಲ, ನೇಮಕಾತಿ ಭ್ರಷ್ಟಾಚಾರ ಸರ್ಕಾರಿ ನೌಕರಿಯ ಆಸೆಯನ್ನು ಕಮರಿ ಹೋಗುವಂತೆ ಮಾಡಿದೆ. ಇದಕ್ಕೇನು ಪರಿಹಾರ? ರೈತ ಬೆಳೆದ ಬೆಲೆ ಸಿಗದೆ

Read More »

ಪಾಂಡವಪುರದಲ್ಲಿ ‘ಸ್ವರಾಜ್ ಉತ್ಸವ’ ಭರದ ಸಿದ್ದತೆ

ಪಾಂಡವಪುರ, ಸೆ.9: ಪಾಂಡವಪುರದಲ್ಲಿ ಮೊದಲ ಬಾರಿಗೆ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘವು ಸೆಪ್ಟೆಂಬರ್ 13ರಂದು ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕೆ

Read More »

ಸ್ವರಾಜ್ ಉತ್ಸವದಲ್ಲಿ ಪ್ಲಾಸ್ಟಿಕ್‌ ಅಸುರ, ಕ್ಯಾತನಹಳ್ಳಿ ಗ್ರಾಮ ವಿನ್ಯಾಸ ಸುಂದರ!!

ಪಾಂಡವಪುರ, ಸೆ. 13- ಪಾಂಡವ ಕ್ರೀಡಾಂಗಣದಲ್ಲಿ ನಡೆದ ಸ್ವರಾಜ್ ಉತ್ಸವವು ವೈವಿಧ್ಯಮಯ ಮಳಿಗೆಗಳ ಸಮಾಗಮದಿಂದ ಕಳೆಗಟ್ಟಿತು. ಆರೋಗ್ಯ, ಕೃಷಿ, ಯುವಜನ ಸಬಲೀಕರಣ, ಮಹಿಳಾ ಸಶಕ್ತೀಕರಣ, ಪರಿಸರ, ತಂತ್ರಜ್ಞಾನ, ತ್ಯಾಜ್ಯ ನಿರ್ವಹಣೆ ಸೇರಿದಂತೆ 12ಕ್ಕೂ ಹೆಚ್ಚು

Read More »

ದೇಶಗಳ ಅಭಿವೃದ್ಧಿಗೆ ಹಳ್ಳಿಗಳೇ ಬೇಕು: ದರ್ಶನ್‌ ಪುಟ್ಟಣ್ಣಯ್ಯ

ಪಾಂಡವಪುರ, ಸೆ. 13: ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಹಳ್ಳಿಯ ಜೀವನವನ್ನು ಸುಧಾರಿಸುವುದು, ಉಪ ಉತ್ಪನ್ನಗಳ ಮೂಲಕ ಆರ್ಥಿಕತೆಯನ್ನು ಬಲಪಡಿಸುವುದೇ ಸ್ವರಾಜ್‌ ಉತ್ಸವದ ಗುರಿ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ

Read More »

ಸ್ವರಾಜ್ಯ ಉತ್ಸವ: ಹಳ್ಳಿಹಳ್ಳಿಯಲ್ಲಿ ರೈತಸಂಘದ ಪ್ರಚಾರ

ಪಾಂಡವಪುರ, ಸೆ.13: ಪುಟ್ಟಣ್ಣಯ್ಯ ಫೌಂಡೇಶನ್‌ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಸೆ.13ರಂದು ನಡೆಯಲಿರುವ ಸ್ವರಾಜ್ಯ ಉತ್ಸವದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ಭರದ ಪ್ರಚಾರ ಆರಂಭಿಸಿದ್ದಾರೆ. ರೈತ ಸಂಘದ ಯುವ ಮುಖಂಡರಾದ

Read More »